ನದಿ ದಡದಲ್ಲಿ ನೀರು ಕುಡಿಯುತ್ತಿರುವ ಜಿಂಕೆ, ಮೊಸಳೆಯ ಹಠಾತ್ ಹಲ್ಲೆಯಿಂದ ಪಾರಾದದ್ದು ನೋಡಿ ಜನರಂತಿದ್ದಾರೆ, “ತಲೆಯ ಸರಿಯಾದ ಉಪಯೋಗ!”

ಯುದ್ಧದಲ್ಲಿ ಗೆಲುವು ಸದಾ ಅವರದೇ ಆಗುತ್ತದೆ, ಯಾರು ಪ್ರತಿ ಕ್ಷಣ ತಮ್ಮ ಕಣ್ಣು, ಕಿವಿ, ಮೂಗು ಇವೆಲ್ಲ ಎಚ್ಚರಿಕೆಯಿಂದ ಇಡುತ್ತಾರೆ ಅವರು ಮಾತ್ರ ಯುದ್ಧದಲ್ಲಿ ಗೆಲ್ಲಲು ಸಾಧ್ಯ. ಯಾವುದೇ ಸಮಯದಲ್ಲಿ ಒಂದೇ ಒಂದು ಕ್ಷಣವೂ ನಿರ್ಲಕ್ಷ್ಯ ವಹಿಸಿದರೆ ಸಾಕು ಗೆಲುವುದರ ಹೊರತಾಗಿ ಸೋಲು ನಿಶ್ಚಿತ, ಬದುಕಿನ ಬದಲಾಗಿ ಸಾವು ನಿಶ್ಚಿತ. ರಣಭೂಮಿಯಲ್ಲಿ ಅಷ್ಟೇ ಅಲ್ಲ ಅರಣ್ಯದಲ್ಲಿಯೂ ಸಹ ಈ ನಿಯಮ ಜಾರಿಯಾಗುತ್ತದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಕೂಡಲೇ ನಿಮ್ಮ ಬಾಯಿಂದ ಬರುವ ಶಬ್ದ ವೇನೆಂದರೆ ‘ಅಬ್ಬಾ! ಅರಣ್ಯದಲ್ಲಿ ಹೆಜ್ಜೆ ಹೆಜ್ಜೆಗೂ ತುಂಬಾ ಎಚ್ಚರದಿಂದ ಇರಬೇಕಾಗುತ್ತದೆ…..”

ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಇವರು ಈ ವಿಡಿಯೋ ವನ್ನು ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡುತ್ತ ಕ್ಯಾಪ್ಶನ್ ನಲ್ಲಿ ಬರೆದಿದ್ದಾರೆ,’ ಶರೀರದ ಅತೀ ಮುಖ್ಯವಾದ ಭಾಗ ಮೆದಳು (ಬುದ್ಧಿ) ಆಗಿರುತ್ತದೆ. ಅದನ್ನು ಜೋಪಾನವಾಗಿಡುವದು ಮತ್ತು ಅದನ್ನು ಸರಿಯಾದ ಸಮಯದಲ್ಲಿ ಹೇಗೆ ಬಳಸುವದು ಎಂಬುದು ತುಂಬಾ ಮುಖ್ಯವಾಗಿದೆ”. ಈ ವಿಡಿಯೋದಲ್ಲಿ ಒಂದು ಜಿಂಕೆಯು ಕೊಳದ ದಂಡೆಯಲ್ಲಿ ನೀರು ಕುಡಿಯುತ್ತಿರುವದು ಕಂಡು ಬರುತ್ತದೆ. ಕೊಳದ ಮಧ್ಯದಿಂದ ಒಂದು ಮೊಸಳೆ ಶರವೇಗದಲ್ಲಿ ಹಠಾತ್ ಹಲ್ಲೆಯನ್ನು ಮಾಡಿ ಜಿಂಕೆಯನ್ನು ತನ್ನ ಬಾಯಲ್ಲಿ ಹಿಡಿಯಬೇಕೆಂದು ಅದರ ಮೇಲೆ ಜಿಗಿಯುತ್ತದೆ. ಮೊಸಳೆ ಬಂದ ರೀತಿ ನೋಡಿದರೆ ಪ್ರತಿಯೊಬ್ಬರು ಭಯಪಡುವದು ಸಹಜ. ಇಂತಹ ಸಮಯದಲ್ಲಿ ಜಿಂಕೆ ಮೊಸಳೆ ಹಾರಿ ಬರುವದನ್ನು ನೋಡಿ ತನ್ನ ಬುದ್ಧಿಯನ್ನು ಉಪಯೋಗಿಸಿ ಅದು ಜೋರಾಗಿ ಹಿಂದಕ್ಕೆ ಜಿಗಿಯುತ್ತದೆ. ತದನಂತರ ಏನಾಗುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ನೀವೇ ನೋಡಿ……..

ವಿಡಿಯೋ ನೋಡಿದ ಪ್ರತಿಯೊಬ್ಬರು ಜಿಂಕೆಯ ಬುದ್ಧಿಯ ಕುರಿತು ಹೊಗಳುತ್ತಿದ್ದಾರೆ. ಒಬ್ಬ ಸೋಶಿಯಲ್ ಮೀಡಿಯಾ ಯೂಜರ್ ಈ ವಿಡಿಯೋ ನೋಡಿ ಇದು ತುಂಬಾ ಅದ್ಭುತವಾಗಿದೆ! ಎಂದು ಹೇಳಿದ್ದಾನೆ.