ಪತಿಗೆ ಟ್ರೈನ್ ನಲ್ಲಿ ಬಂದಿತು ಹೃದ#ಯಾಘಾತ; ಸತಿ ಸಾವಿತ್ರಿಯಾಗಿ ಮೃತ್ಯುವಿನ ದವಡೆಯಿಂದಲೇ ಬಚಾವ್ ಮಾಡಿದ ಪತ್ನಿ!

ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ರೈಲ್ವೇ ಪೊಲೀಸ್ ಸಿಬ್ಬಂದಿ ಹಾಗೂ ಆತನ ಪತ್ನಿ ಸಮಯಪಾಲನೆಯಿಂದ ವ್ಯಕ್ತಿಯೊಬ್ಬನ ಪ್ರಾಣ ಉಳಿದ ಘಟನೆ ನಡೆದಿದೆ.  ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕನೊಬ್ಬನಿಗೆ ಹೃದಯಾ#ಘಾತವಾದ ಕಾರಣ ಆತನ ಆರೋಗ್ಯ ಹದಗೆಟ್ಟಿತು.  ತಕ್ಷಣ ಆತನ ಪತ್ನಿ ಸಿಪಿಆರ್ ನೀಡಿ ಪತಿಯ ಪ್ರಾಣ ಉಳಿಸಿದ್ದಾಳೆ. ತದನಂತರ ಕಾರ್ಯರತ ಆರ್‌ಪಿಎಫ್ ಯೋಧರು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.  ಈಗ ಅವರ ಸ್ಥಿತಿ ಸ್ಥಿರವಾಗಿದೆ.

ಶುಕ್ರವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ 67 ವರ್ಷದ ಕೇಶವನ್ ತನ್ನ ಪತ್ನಿ ದಯಾ ಜೊತೆ ನಿಜಾಮುದ್ದೀನ್ ತಿರುವನಂತಪುರಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದರು.  ಚಲಿಸುತ್ತಿದ್ದ ರೈಲಿನಲ್ಲಿ ಇದ್ದಕ್ಕಿದ್ದಂತೆ ಕೇಶವನ  ಆರೋಗ್ಯದ ಸ್ಥಿತಿ ಹದಗೆಟ್ಟಿತು.  ಈ ಮಾಹಿತಿಯನ್ನು ಆರ್‌ಪಿಎಫ್‌ಗೆ ನೀಡಲಾಯಿತು.  ಆರ್‌ಪಿಎಫ್ ಸಿಬ್ಬಂದಿ ಕೇಶವನ್‌ನನ್ನು ರೈಲಿನಿಂದ ಹೊರಗೆ ತಂದರು.  ಸೈನಿಕರು ಆ ವ್ಯಕ್ತಿಯ  ಹೆಂಡತಿಯನ್ನು CPR ಅನ್ನು ನಿರ್ವಹಿಸಲು ಹೇಳಿದರು.  ಅಷ್ಟರಲ್ಲಿ ಸೈನಿಕರು ಕೇಶವನ ಕೈಕಾಲು ಮಸಾಜ್ ಮಾಡುತ್ತಿದ್ದರು.  ಕೇಶವನಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.

ಈ ಎಲ್ಲ ಘಟನೆ ನಡೆಯುತ್ತಿದ್ದಂತೆಯೇ ಫ್ಲ್ಯಾಟ್ ಫಾರಂ ಮೇಲೇ ಜನ ಜಮಾಯಿಸಿದ್ದರು.  ಜನಸಂದಣಿಯನ್ನು ಕಂಡು ಆರ್‌ಪಿಎಫ್ ಕಾನ್‌ಸ್ಟೆಬಲ್‌ಗಳಾದ ಅಶೋಕ್ ಕುಮಾರ್ ಮತ್ತು ನಿರಂಜನ್ ಸಿಂಗ್ ಅಲ್ಲಿಗೆ ಬಂದರು.  ಅಶೋಕ್ ಕುಮಾರ್ ಕೇಶವನ ಆರೋಗ್ಯ ನೋಡಿದರು.  ಅವರಿಗೆ  ಪರಿಸ್ಥಿತಿಯ ಗಂಭೀರತೆ ಅರ್ಥವಾಯಿತು.  ಸಿಪಿಆರ್ ನೀಡುವಂತೆ ತಿಳಿಸಿದರು.  ಇದಾದ ನಂತರ ದಯಾ ತನ್ನ ಪತಿಯನ್ನು ತನ್ನ ಬಾಯಿಯ ಮೂಲಕ ಉಸಿರು ನೀಡಿದರು.  ಅರ್ಧ ಗಂಟೆಯ ನಂತರ ಕೇಶವನಿಗೆ ಪ್ರಜ್ಞೆ ಬಂದಿತು.  ಆರ್‌ಪಿಎಫ್ ಯೋಧರು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಕೇಶವನ್‌ನನ್ನು ಮಥುರಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.