ಲಾಕ್ ಡೌನ್ ನಲ್ಲಿ ಆಸರೆ ಕೊಟ್ಟ ಗೆಳೆಯನ ಹೆಂಡತಿಯನ್ನೇ ಓಡಿಸಿಕೊಂಡು ಹೋದ ಭೂಪ!

ತಿರುವನಂತಪುರಂ: ಪ್ರಪಂಚದಾದ್ಯಂತ ಹರಡಿರುವ ಕರೋನಾ ವೈರಸ್ ಹೆಚ್ಚಿನ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಆದಾಗ್ಯೂ, ಲಾಕ್ಡೌನ್ ದಿಂದ ಕುಟುಂಬದ ಎಲ್ಲ ಸದಸ್ಯರು ದೀರ್ಘಕಾಲದವರೆಗೆ ಮನೆಯಲ್ಲಿಯೇ ಇರುವದರಿಂದ, ಅವರ ಸಂಬಂಧ ಮತ್ತು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಿದೆ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಇದು ವೈವಾಹಿಕ ಸಂಬಂಧ ಮತ್ತು ಸ್ನೇಹಕ್ಕೆ ಕಳಂಕ ತಂದಿದೆ.

ಇಲ್ಲಿಯ ಒಬ್ಬ ವ್ಯಕ್ತಿಯ ಹೆಂಡತಿ ತನ್ನ ಬಾಲ್ಯದ ಸ್ನೇಹಿತನೊಂದಿಗೆ ಓಡಿಹೋಗಿದ್ದಾಳೆ. ಲಾಕ್ ಡೌನ್ ಸಮಯದಲ್ಲಿ ಆ ವ್ಯಕ್ತಿ ತನ್ನ ಸ್ನೇಹಿತನನ್ನು ಮನೆಯಲ್ಲಿ ಆಶ್ರಯ ನೀಡಿದ್ದನು. ಆದರೆ, ಈ ಸ್ನೇಹಿತ ಸ್ನೇಹದ ಲಾಭವನ್ನು ಪಡೆದುಕೊಂಡು ಅವನಿಗೆ ಆಶ್ರಯ ನೀಡಿದ ಸ್ನೇಹಿತನ ಕುಟುಂಬವನ್ನು ನಾಶಪಡಿಸಿದನು.

ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಮೂಲದ 32 ವರ್ಷದ ವ್ಯಕ್ತಿ ಎರ್ನಾಕುಲಂನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಲಾಕ್ ಡೌನ್ ಸಮಯದಲ್ಲಿ ತನ್ನ ಬಾಲ್ಯದ ಸ್ನೇಹಿತನನ್ನು ಭೇಟಿಯಾದ. ಆ ಸಮಯದಲ್ಲಿ, ಇಬ್ಬರೂ ಮೂವತ್ತುಪುಜಾ ನಗರದಲ್ಲಿ ಸಿಲುಕಿಕೊಂಡರು. ಅವರು ಹಲವು ವರ್ಷಗಳಿಂದ ಭೇಟಿಯಾದ ಸ್ನೇಹಿತನ ಮೇಲೆ ಕರುಣೆಬಂತು , ಆಗ ಈ ಯುವಕ ಸ್ನೇಹಿತನನ್ನು ತನ್ನ ಮನೆಗೆ ಕರೆದೊಯ್ದನು. ಅವನಿಗೆ ಆಶ್ರಯ ನೀಡಿದನು. ಆದರೆ, ಮೇ 1 ರಂದು ಎರ್ನಾಕುಲಂ ಜಿಲ್ಲೆಯನ್ನು ಹಸಿರು ವಲಯವೆಂದು ಘೋಷಿಸಿದ ನಂತರವೂ ಯುವಕನು ಮನೆಯಿಂದ ಹೊರಹೋಗಲು ಇಷ್ಟಪಡದ ಕಾರಣ ಈತನಿಗೆ ಅನುಮಾನ ಉಂಟಾಯಿತು.

ಏತನ್ಮಧ್ಯೆ, ಯುವಕನ ಪತ್ನಿ ಕಳೆದ ವಾರ ತನ್ನ ಮಕ್ಕಳೊಂದಿಗೆ ನಾಪತ್ತೆಯಾಗಿದ್ದಳು. ಆದರೆ, ಆ ಸಮಯದಲ್ಲಿ ಪೊಲೀಸರಿಗೆ ದೂರು ನೀಡಿದ ನಂತರ, ಮಹಿಳೆ ತನ್ನ ಮಕ್ಕಳೊಂದಿಗೆ ಪೊಲೀಸರ ಮುಂದೆ ಹಾಜರಾದಳು. ನಂತರ ಅವಳನ್ನು ಪತಿ ಮನೆಗೆ ಕರೆದುಕೊಂಡುಹೋದರು. ಅಲ್ಲದೆ ಇಬ್ಬರು ಪೊಲೀಸರ ಮುಂದೆ ಒಟ್ಟಿಗೆ ಇರಲು ಸಹ ಒಪ್ಪಿದ್ದರು.

ಆದರೆ ಕೆಲವು ದಿನಗಳ ನಂತರ ಈ ಮಹಿಳೆ ತನ್ನ ಮನೆಗೆ ಅತಿಥಿಯಾಗಿ ಬಂದಿದ್ದ ಪತಿಯ ಸ್ನೇಹಿತನೊಂದಿಗೆ ಮತ್ತೆ ಪರಾರಿಯಾದಳು. ಅವಳು ತನ್ನ ಮಕ್ಕಳನ್ನೂ ತನ್ನೊಂದಿಗೆ ಕರೆದೊಯ್ದಿದ್ದಾಳೆ. ಪತಿ ತನ್ನ ಹೆಸರಿನಲ್ಲಿ ಖರೀದಿಸಿದ ಕಾರು ಮತ್ತು ಆಭರಣಗಳನ್ನು ಸಹ ಅವಳು ತಗೆದುಕೊಂಡು ಹೋಗಿದ್ದಾಳೆ.