ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಯೋಜನೆಗಳ ಪ್ರಯೋಜನ ಇಲ್ಲ! -ಅಸ್ಸಾಂ ಸಿಎಂ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದೊಡ್ಡ ಮತ್ತು ಐತಿಹಾಸಿಕ ನಿರ್ಧಾರ ಮಾಡಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎರಡಕ್ಕೂ ಹೆಚ್ಚು ಮಕ್ಕಳ ಪೋಷಕರು ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಕಳೆದುಕೊಳ್ಳಬಹುದು. ರಾಜ್ಯದ ಯೋಜನೆಗಳ ಲಾಭ ಪಡೆಯಲು ಅಸ್ಸಾಂ ಸರ್ಕಾರ ಹಂತಹಂತವಾಗಿ ‘ಎರಡು ಮಕ್ಕಳ ನೀತಿ’ ಜಾರಿಗೆ ತರಲಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಇದು ಸಾಧ್ಯವಿಲ್ಲ, ಆದರೆ ಇದು ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಜಾರಿಗೆ ಬರಲಿದೆ ಎಂದು ಅವರು ಜನಸಂಖ್ಯಾ ನಿಯಂತ್ರಣಕ್ಕೆ ಸೆಡ್ಡು ಹೊಡೆದಿದ್ದಾರೆ. ಒಂದು ರೀತಿ ಇದು ಮೋದಿ ಸರ್ಕಾರಕ್ಕೂ ಸೆಡ್ಡು ಹೊಡೆದ ಹಾಗಿದೆ. ಅವರು ಮಾಡದ್ದನ್ನು ಇವರು ತಾವೇ ಮಾಡುತ್ತಿದ್ದಾರೆ.
ಸಿಎಂ ಹಿಮಂತ್ ಏನು ಹೇಳಿದರು :
ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ನಡೆಸುತ್ತಿರುವುದರಿಂದ ಅಸ್ಸಾಂನ ಎಲ್ಲಾ ಯೋಜನೆಗಳಲ್ಲಿ ಉದ್ದೇಶಿತ ‘ಜನಸಂಖ್ಯಾ ನಿಯಂತ್ರಣ ನೀತಿ’ ತಕ್ಷಣ ಜಾರಿಗೆ ಬರುವುದಿಲ್ಲ ಎಂದು ಶರ್ಮಾ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅವರು ಹೇಳಿದರು, “ಶಾಲೆಗಳು ಮತ್ತು ಕಾಲೇಜುಗಳಲ್ಲಿ ಉಚಿತ ಶಿಕ್ಷಣ ಅಥವಾ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ವಸತಿ ಮುಂತಾದ ಎರಡು ಮಕ್ಕಳ ನೀತಿಯನ್ನು ನಾವು ಜಾರಿಗೆ ತರಲು ಸಾಧ್ಯವಿಲ್ಲ.
ಆದರೆ ಕೆಲವು ಯೋಜನೆಗಳಲ್ಲಿ ಅಂದರೆ ರಾಜ್ಯ ಸರ್ಕಾರವು ವಸತಿ ಯೋಜನೆಯನ್ನು ಪ್ರಾರಂಭಿಸಿದರೆ, ಇಬ್ಬರು ಮಕ್ಕಳ ನಿಯಮವನ್ನು ಖಂಡಿತ ಜಾರಿಗೆ ತರಬಹುದು. ಕ್ರಮೇಣ ಇದನ್ನು ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಯಲ್ಲೂ ಜಾರಿಗೆ ತರಲಾಗುವುದು ಎಂದು ಹಿಮಂತ್ ಹೇಳಿದ್ದಾರೆ.

ವಿರೋಧ :
ನಾನೂ ಕೂಡ ಐದು ಸಹೋದರರ ಕುಟುಂಬಕ್ಕೆ ಸೇರಿದವನು, ಪ್ರತಿಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 1970 ರ ದಶಕದಲ್ಲಿ ನಮ್ಮ ಪೋಷಕರು ಅಥವಾ ಇತರ ಜನರು ಏನು ಮಾಡಿದರು ಎಂಬುದರ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ, ಈಗ ಪಾಲಿಸುವುದು ಮುಖ್ಯ ಎಂದು ಹೇಳಿದರು.
ಪ್ರತಿಪಕ್ಷಗಳು ಎಂತಹ ವಿಚಿತ್ರವಾದ ಮಾತುಗಳನ್ನು ಹೇಳುತ್ತಿವೆಯೆಂದರೆ, ನಮ್ಮನ್ನು ಮತ್ತೆ 70 ರ ದಶಕಕ್ಕೆ ಹಿಂತಿರುಗಿಸುತ್ತಿವೆ. ಕಳೆದ ತಿಂಗಳು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶರ್ಮಾ, ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು ಎರಡು ಮಕ್ಕಳ ನಿಯಮವನ್ನು ಪ್ರತಿಪಾದಿಸುತ್ತಿದ್ದಾರೆ.
ಮುಸ್ಲಿಮರಿಗೆ ಮನವಿ :
ಈ ಹಿಂದೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಶರ್ಮಾ ಮುಸ್ಲಿಮರಿಗೆ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೆರಬಾರದು, ಮತ್ತು ಜನಸಂಖ್ಯೆಯನ್ನು ನಿಯಂತ್ರಿಸಬೇಕು ಎಂದು ಮನವಿ ಮಾಡಿದ್ದರು. ಜನಸಂಖ್ಯೆ ಹೆಚ್ಚಾಗುವುದು ಬಡತನ ಮತ್ತು ಉದ್ಯೋಗದ ಕೊರತೆಗೆ ದೊಡ್ಡ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಅದಕ್ಕಾಗಿಯೇ ಜನಸಂಖ್ಯೆಯನ್ನು ನಿಯಂತ್ರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.