Lockdown: ವಾಯಿನ್ ಶಾಪ್ ಓಪನ್ ಆಗುತ್ತಿದ್ದಂತೆಯೇ, ಗ್ರಾಹಕ ಮೊದಲು ಆರತಿ ಎತ್ತಿ ತೆಂಗಿನಕಾಯಿ ಒಡೆದ ದೃಶ್ಯ ವೈರಲ್!!
ಕೊರೊನ ಸಂಕ್ರಮಣದಿಂದ ಇಡೀ ಜಗತ್ತಿನ ಜನತೆಯೇ ರೋಸಿ ಹೋಗಿದೆ. ಅದರಲ್ಲೂ ಲಾಕ್ ಡೌನ್ ನಿಂದ ಅಂತೂ ಮನೆಯಲ್ಲಿ ಕುಳಿತು ಕುಳಿತು ಜನರಿಗೆ ಬೇಜಾರಾಗಿ ಬಿಟ್ಟಿದೆ.
ಇನ್ನು ಒಂದು ವಿಶೇಷ ಸಮುದಾಯದ ಬಗ್ಗೆ ಮಾತನಾಡುವದಾದರೆ ದೇಶದಲ್ಲಿರುವ ಎಣ್ಣೆ ಪ್ರೀಯರು. ಇವರ ಪಡುತ್ತಿರುವ ಕಷ್ಟ, ಬವಣೆ ಅಷ್ಟಿಟ್ಟಲ್ಲ. ಹಾಗೂ ಹೀಗೂ ಸರಕಾರ ರೆಡ್,ಆರೆಂಜ್ ಮತ್ತು ಗ್ರೀನ್ ಝೋನ್ ಅಂತ ವಿಂಗಡಿಸಿ ಕೆಲವು ಷರತ್ತು, ನಿಯಮಗಳೊಂದಿಗೆ ವೈನ್ ಶಾಪ್ ಓಪನ್ ಮಾಡಲು ಅನುಮತಿ ಕೊಟ್ಟಿದ್ದೇ ತಡ ಜನ ಒಂದೇ ಸಮನೆ ಮಧ್ಯ ಖರೀದಿಗೆ ಮುಗಿ ಬಿದ್ದಿದ್ದಾರೆ. ಇದರಲ್ಲಿ ಸರಕಾರದ ಬರಿದಾದ ಬೊಕ್ಕಸಕ್ಕೆ ಹೆಚ್ಚುವರಿ ಹಣ ಕರದ ರೂಪದಲ್ಲಿ ಬರುವದರಿಂದ ಖಾಲಿಯಾದ ಸರಕಾರದ ಖಜಾನೆ ತುಂಬಲು ಸಹಾಯವಾಗುವದು.

ಬಾಲಾಜಿ ಹೆಸರಿನ ಟ್ವಿಟರ್ ಯೂಜರ್ ನೊಬ್ಬ ಈ ವಿಡಿಯೋ ತನ್ನ ಅಕೌಂಟ್ ನಲ್ಲಿ ‘ಕುಡುಕನೊಬ್ಬ ಮಧ್ಯದಂಗಡಿಯ ಪೂಜೆ ಮಾಡುತ್ತಿರುವಾಗ’ ಎಂಬ ಕ್ಯಾಪ್ಶನ್ ದ ಅಡಿಯಲ್ಲಿ ಶೇರ್ ಮಾಡಿದ್ದಾನೆ.
With all necessary pooja by drunken citizen people #LiquorShops are opened in #Bangalore #Bengaluru , just took this video and pics , don't know what to say 🤦😭 pic.twitter.com/nPKbXsdFIG
— balaji pa (@balajitech1) May 4, 2020
ಅಂದ ಹಾಗೆ ಈ ವೀಡಿಯೋ ನಮ್ಮ ಕರ್ನಾಟಕದಲ್ಲಿಯದೇ ಆಗಿದೆ.