VIDEO : ಬಾಡಿಗೆ ದುಡ್ಡಿಗಾಗಿ ಆಸ್ಪತ್ರೆಯ ಆಕ್ಸಿಜನ್ ಪೈಪ್ ಕಟ್ ಮಾಡಿದ ಆ್ಯಂಬುಲೆನ್ಸ್ ಡ್ರೈವರ್ ಗೆ ಪೋಲಿಸರಿಂದ ಬರೊಬ್ಬರಿ ಬಾಡಿಗೆ ಸಂದಾಯ!

ಭೂಮಿ ಮೇಲೆ ಎಂಥೆಂಥ ಕ್ರಿ’ಮಿಗಳು ಇರುತ್ತಾವೆ ನೋಡಿ, ಕೆಲವು ದಿನದಿಂದ ಶ’ವ ಸಾಗಾಟ ಮಾಡಿಲ್ಲ, ದುಡ್ಡು ಹಿರಿಯಲು ಆಗುತ್ತಿಲ್ಲ ಎಂದು ಆ್ಯಂಬುಲೆನ್ಸ್ ಚಾಲಕನೊಬ್ಬ ಆಸ್ಪತ್ರೆಯ ಆ’ಕ್ಸಿ’ಜನ್ ಪೈಪ್ ಕ’ಟ್ ಮಾಡಿ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡಿದ ಪ್ರಕರಣ ನಡೆದಿದೆ. ತೀರ ಮನುಷ್ಯ ಮಟ್ಟಿಗೆ ಕೆಳಗೆ ಇಳಿಯಬಹುದಾ ಎಂಬುದಕ್ಕೆ ತಾಜಾ ಉದಾಹರಣೆ ಇದು.

ದುಡ್ಡಿಗಾಗಿ ಪೇಶೆಂಟ್ ಅಟೆಂಡರ್ ಗಳನ್ನು ಕಾಡಲಿ, ಬೇಡಲಿ, ಆದರೆ ಅವರನ್ನು ಕೊಂ’ದು ಅದನ್ನು ಸಾಗಿಸಿ ಅದರಿಂದ ಬಾಡಿಗೆ ಹಣ ಗಳಿಸುವುದೆಂದರೆ ಮಾನವೀಯತೆ ಎಷ್ಟರ ಮಟ್ಟಿಗೆ ಸತ್ತೋಗಿದೆ ಅಂತ ನೋಡಿ. ಇದು ನಡೆದಿರುವುದು ತೆಲಂಗಾಣದಲ್ಲಿ, ಅಲ್ಲಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಇಂಥ ಪ್ರಕರಣ ನಡೆದಿದೆ.

ಇಂಥ ಕೆಲಸ ಮಾಡಿ ಸಿಗಾಕಿಕೊಂಡ ಆ್ಯಂಬುಲೆನ್ಸ್ ಚಾಲಕನಿಗೆ ಪೊಲೀಸರು ಭರ್ಜರಿ ಕಜ್ಜಾಯ ಕೊಟ್ಟಿದ್ದಾರೆ. ಇಡೀ ಜಗತ್ತು ಕೊರೋನದೊಂದಿಗೆ ಹೋರಾಡುತ್ತಿದೆ. ಅದರಲ್ಲೂ ಭಾರತ ಎರಡನೇ ಅಲೆಯಿಂದ ತತ್ತರಿಸಿದೆ. ರೋಗಿಗಳ ಪ್ರಾಣ ಉಳಿಸಲು ವೈದ್ಯಕೀಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಹೀಗಿರುವಾಗ ಇಂಥ ಅನಾಗರಿಕರು ಮಾಡುವ ಕೆಲಸದಿಂದ ಅದೆಂಥ ಅನಾಹುತ ಆಗುತ್ತಿತ್ತು ನೋಡಿ.

ನಿಜಾಮಾಬಾದ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಇದು ನಡೆದಿದ್ದು, ಅಲ್ಲಿನ ಐಸಿಯು ಗೆ ಸಂಪರ್ಕ ಕಲ್ಪಿಸುವ ಆ’ಕ್ಸಿ’ಜನ್ ಪೈ’ಪ್ ಕ’ತ್ತ’ರಿ’ಸಲಾಗಿದೆ. ರೋಗಿಗಳು ನರಳುವುದನ್ನು ನೋಡಿದ ವಾರ್ಡ್ ಬಾಯ್ ಈ ಅವಾಂತರ ಕಂಡುಹಿಡಿದಿದ್ದಾನೆ. ತಕ್ಷಣ ಆತ ಆಸ್ಪತ್ರೆ ವೈದ್ಯರು ಹಾಗೂ ಹಿರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸುತ್ತಾನೆ. ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದರು.

ಆ ಆ್ಯಂಬುಲೆನ್ಸ್ ಚಾಲಕ ಖಾಸಗಿ ಆಸ್ಪತ್ರೆಯವನಾಗಿದ್ದು ಕೆಲ ದಿನದಿಂದ ಆತನಿಗೆ ಬಾಡಿಗೆ ಸಿಕ್ಕಿರಲಿಲ್ಲವಂತೆ, ಹೀಗಾದರೆ ದುಡ್ಡು ಹಿರಿಯುವುದು ಹೇಗೆ ಅಂತ ಯೋಚಿಸಿ ಈ ಕೃತ್ಯ ಎಸಗಿದ್ದಾನೆ. ಆಸ್ಪತ್ರೆಯ ಸಿಬ್ಬಂದಿಯ ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ತಡಮಾಡದೇ ಆಸ್ಪತ್ರೆಯಲ್ಲಿಯೇ ಆತನಿಗೆ ಬೇಕಾದಷ್ಟು ಕೊಟ್ಟಿದ್ದಾರೆ. ಕೊನೆಗೆ ವೈದ್ಯರೊಬ್ಬರು ಬಂದು ಅವನನ್ನು ಬಿಡಿಸಿಕೊಂಡಿದ್ದಾರೆ.

ಈ ಘಟನೆಯ ನಂತರ ಆಸ್ಪತ್ರೆಯವರ ಮನವಿ ಮೇರೆಗೆ ಆಸ್ಪತ್ರೆಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಕೊರೋನ ವಾರ್ಡ್ ಸುತ್ತ ಮುತ್ತ ಕೂಡ ಯಾರೂ ಸುಳಿಯದಂತೆ ಮಾಡಲಾಗಿದೆ. ಆದರೆ ಹಣಕ್ಕಾಗಿ ಯಾರದೊ ಹೆ’ಣ ಕೆಡುವುವ ಇಂಥವರಿಂದಾಗಿ ಮಾನವೀಯತೆಯೇ ಮುಜುಗರಕ್ಕೆ ಒಳಗಾಗಿದ್ದು ಸುಳ್ಳಲ್ಲ. ವಿಡಿಯೊ ಮೇಲಿದೆ ನೋಡಿ.
-Team Infotrend