ಮದುವೆ ಮಂಟಪದಲ್ಲೇ ವರನಿಗೆ ನ್ಯೂಸ್ ಪೇಪರ್ ಓದಲು ಹೇಳಿದರು : ಆತ ಓದಲು ತಡವರಿಸಿದಾಗ ಏನು ಮಾಡಿದರು ನೋಡಿ

ಎರಡು ದಿನಗಳ ಹಿಂದೆ ಹಾಡು, ಡ್ಯಾನ್ಸ್, ನಗೆಯೊಂದಿಗೆ ಪ್ರತಿಧ್ವನಿಸುತ್ತಿದ್ದ ಮನೆ ಈಗ ಒಂದೇ ಸಲಕ್ಕೆ ದುಃಖ ಮತ್ತು ನಿರಾಶೆಯ ಗೂಡಾಯಿತು. ವಾಸ್ತವವಾಗಿ ಉತ್ತರಪ್ರದೇಶದ ಔರಯಾ (Auraiya) ಜಿಲ್ಲೆಯ ಸದರ್ ಕೊಟ್ವಾಲಿ ಪ್ರದೇಶದ ಜಮಾಲಿಪುರ ಗ್ರಾಮದ ನಿವಾಸಿ ಅರ್ಜುನ್ ಸಿಂಗ್ ತಮ್ಮ ಮಗಳು ಅರ್ಚನಾಳ ಮದುವೆಯನ್ನು ಅಚಲ್ಡಾದ ಬಾನ್ಶಿ ಥಾಣಾದ ನಿವಾಸಿ ಶಿವಂ ಎಂಬುವರೊಂದಿಗೆ ನಿಗದಿಪಡಿಸಿದ್ದರು. ಸುಶಿಕ್ಷಿತ ಹುಡುಗನನ್ನು ನೋಡಿದ ಅರ್ಜುನ್ ಸಿಂಗ್ ಹುಡುಗನನ್ನು ಮೊದಲ ನೋಟದಲ್ಲೇ ಇಷ್ಟಪಟ್ಟರು.

ಇದರ ನಂತರ ಮಾತುಕತೆಯಲ್ಲ ಮುಗಿದು ನಿಗದಿತ ದಿನಾಂಕವನ್ನು ಎಲ್ಲಾ ಸಿದ್ಧತೆಗಳೊಂದಿಗೆ ತೆಗೆದುಕೊಳ್ಳಲಾಯಿತು. ಬೈಕ್ ಮತ್ತು ವರದಕ್ಷಿಣೆ ಹಣವನ್ನು ನೀಡುವ ಮೂಲಕ ಶಗುನ್ ಕೂಡ ಮುಗಿಸಿದರು. ಮೆರವಣಿಗೆಯಲ್ಲಿ ವರ ಕನ್ನಡಕ ಧರಿಸಿರುವುದನ್ನು ನೋಡಿದಾಗ ಅದ್ಯಾಕೊ ಅನುಮಾನ ಮೂಡಿತು.

ಜೂನ್ 20 ರಂದು ಮೆರವಣಿಗೆ ಮನೆಗೆ ಬಂದಾಗ ವರನು ಇಡೀ ದಿನ ಕನ್ನಡಕವನ್ನು ಧರಿಸಿರುವುದನ್ನು ಹುಡುಗಿಯ ತಂದೆ ಅರ್ಜುನ್ ಸಿಂಗ್ ನಿರಂತರವಾಗಿ ನೋಡುತ್ತಿದ್ದನು. ಮಹಿಳೆಯರಿಗೂ ಅನುಮಾನ ಬಂತು, ನಂತರ ಮದುವೆ ಮಂಟಪದಲ್ಲಿಯೇ ಕನ್ನಡಕ ತಗೆದು ಹುಡುಗನ ಕೈಗೆ ನ್ಯೂಸ್ ಪೇಪರ್ ಕೊಟ್ಟು ಓದಲು ಹೇಳಿದರು.

ಆದರೆ ವರ ಶಿವಂಗೆ ಕನ್ನಡಕವಿಲ್ಲದೆ ಹಿಂದಿ ಪತ್ರಿಕೆ ಓದಲಾಗಲಿಲ್ಲ. ಹುಡುಗನಿಗೆ ಕನ್ನಡಕವಿಲ್ಲದೆ ನೋಡಲು ಕೂಡ ಸಾಧ್ಯವಾಗಲಿಲ್ಲ. ಇದನ್ನು ಕೇಳಿದ ವಧು ಅಂದರೆ ಅರ್ಚನಾ ಮದುವೆಯಾಗಲು ನಿರಾಕರಿಸಿದರು. ಇದರ ನಂತರ, ಹುಡುಗಿಯ ಕಡೆಯ ಎಲ್ಲಾ ಜನರು ಒಮ್ಮತದಿಂದ ಮದುವೆ ಮುರಿಯಲು ನಿರ್ಧರಿಸಿದರು.

ನಂತರ ವರದಕ್ಷಿಣೆ ರೂಪದಲ್ಲಿ ನೀಡಲಾದ ನಗದು ಮತ್ತು ಕಾರನ್ನು ಹಿಂದಿರುಗಿಸಬೇಕು ಮತ್ತು ಮದುವೆಯಲ್ಲಿ ಖರ್ಚು ಮಾಡಿದ ಎಲ್ಲವನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿದರು. ಹುಡುಗನ ಕಡೆಯವರು ನಿರಾಕರಿಸಿದಾಗ, ವಧುವಿನ ಪರವಾಗಿ ಕೊಟ್ವಾಲಿ ಔರಯ್ಯದಲ್ಲಿ ದೂರು ನೀಡುವ ಮೂಲಕ ಎಫ್ಐಆರ್ ದಾಖಲಿಸಲಾಗಿದೆ.

ಮದುವೆ ಮುರಿದುಬೀಳಲು ನೀವು ಅನೇಕ ಕಾರಣಗಳನ್ನು ಕೇಳಿರಬೇಕು, ಆದರೆ ಉತ್ತರ ಪ್ರದೇಶದ ಔರಯ ಜಿಲ್ಲೆಯಲ್ಲಿ ಈ ವರನಿಗೆ ಪತ್ರಿಕೆ ಓದಲು ಸಾಧ್ಯವಾಗದಿದ್ದಕ್ಕೆ ಅವರ ವಿವಾಹವು ಮುರಿದುಹೋಯಿತು. ಅಷ್ಟೇ ಅಲ್ಲದೇ ವರನ ಕಡೆಯವರ ಮೇಲೂ ಪ್ರಕರಣ ದಾಖಲಾಗಿದೆ. ವರ ಒಳ್ಳೆ ವಿದ್ಯಾವಂತನಾಗಿದ್ದರೂ ಅವನ ಕಣ್ಣುಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಇತ್ತು. ದುರ್ಬಲ ದೃಷ್ಟಿ ಹುಡುಗನಿಗೆ ಶಾಪವಾಯಿತು, ಮದುವೆ ಮುರಿದುಹೋಯಿತು.