ಐತಿಹಾಸಿಕ ಕಾನೂನು ಜಾರಿ…ತನ್ನ ಬೆಳೆಯಿಂದ ಈಗ ಪ್ರತಿಯೊಬ್ಬ ರೈತನಿಗಾಗುವದು ಭರ್ಜರಿ ಲಾಭ.

ನವದೆಹಲಿ:- ಕೊನೆಗೂ ರೈತರು ಯಾವ ಸುದ್ದಿಗೋಸ್ಕರ ಕಾಯುತ್ತಾ ಇದ್ದರೋ ಆ ಖುಷಿ ಕೊಡುವ ಸುದ್ದಿ ಬಂದೆ ಬಿಟ್ಟಿತು. ಕೇಂದ್ರ ಸರ್ಕಾರ ರೈತರನ್ನು ಆತ್ಮನಿರ್ಭರ ಮಾಡುವ ಸಲುವಾಗಿ ಅಲ್ಲದೆ ರೈತರನ್ನು ಬಲಿಷ್ಠಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಪ್ರಸ್ತಾವಕ್ಕೆ ಅನುಮತಿ ನೀಡಿದೆ. ಕೇಂದ್ರ ಸರ್ಕಾರವು ಮಂಡಿಯಲ್ಲಿಯ ಮತ್ತು ಇನ್ಸ್ಪೆಕ್ಟರ್ ಆಡಳಿತ ತಗೆದು ಹಾಕುವ ಕಾನೂನು ಜಾರಿಯಲ್ಲಿ ತಂದಿದೆ. ಇದರಿಂದ ನಮ್ಮ ದೇಶದ ಪ್ರತಿಯೊಬ್ಬ ರೈತರು ತಮ್ಮ ಆಹಾರ ಧಾನ್ಯಗಳನ್ನು ತಾವೇ ಮಾರಿಕೊಳ್ಳುವ ಅಧಿಕಾರ ಸಿಗಲಿದೆ ಆದುದರಿಂದ ರೈತರಿಗೆ ಉತ್ತಮ ಮಟ್ಟದ ಮೌಲ್ಯ ಸಿಗುವದು ಇದರಿಂದ ಪಡತಿಯೊಬ್ಬ ರೈತರು ಭರ್ಜರಿ ಲಾಭ ಪಡೆಯುವ ಅವಕಾಶ ದೊರೆಯಲಿದೆ.

ವನ್ ನೇಷನ್, ವನ್ ಅಗ್ರಿ ಮಾರ್ಕೆಟ್” ಕಾನೂನಿಗೆ ಸಿಕ್ಕಿದೆ ಮಂಜೂರಿ.
ರೈತರ ಸಲುವಾಗಿ ‘ವನ್ ನೇಷನ್, ವನ್ ಅಗ್ರಿ ಮಾರ್ಕೆಟ್'(one nation – one Agri Market) ಹೊಸ ಕಾಯ್ದೆಯನ್ನು ಬುಧವಾರ ದಿನದಂದು ಅಧಿಸೂಚಿತ ಎಪಿಎಂಸಿ ಮಾರ್ಕೆಟ್ ಹೊರಗೆ ತಡೆ ಮುಕ್ತ ವ್ಯಾಪಾರಕ್ಕೆ ಅವಕಾಶ ನೀಡುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರವು ಅನುಮೋದಿಸಲಾಗಿದೆ.

ಕೃಷಿ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ, 2020, The Farming Produce Trade and Commerce (Promotion and Facilitation) Ordinance),ರಾಜ್ಯ ಸರ್ಕಾರಗಳು ಮಾರುಕಟ್ಟೆಗಳ ಹೊರಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ತೆರಿಗೆ ವಿಧಿಸುವುದನ್ನು ನಿಷೇಧಿಸುತ್ತದೆ. ಮತ್ತು ರೈತರಿಗೆ ತಮ್ಮ ಉತ್ಪನ್ನಗಳನ್ನು ಸಂಭಾವನೆ ದರದಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ.

ಕ್ಯಾಬಿನೆಟ್ ನಿರ್ಧಾರವನ್ನು ಪ್ರಕಟಿಸಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿಕೆಯ ಪ್ರಕಾರ , “ಈಗಿರುವ ಎಪಿಎಂಸಿ ಮಂಡಿಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ. ಅಲ್ಲದೆ ರಾಜ್ಯ ಎಪಿಎಂಸಿ ಕಾನೂನು ಸಹ ಉಳಿಯುತ್ತದೆ. ಆದರೆ ಮಂಡಿಗಳ ಹೊರಗೆ, ಈ ಹೊಸ ಕಾಯ್ದೆ ಅನ್ವಯವಾಗುತ್ತದೆ. ‘ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದ ಹೊರಗೆ ಹೆಚ್ಚುವರಿ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ ಅಲ್ಲದೆ ಇದರಿಂದ ಹೆಚ್ಚುವರಿ ಸ್ಪರ್ಧೆಯಿಂದಾಗಿ ರೈತರು ಸಂಭಾವನೆ ಪಡೆಯುವ ಬೆಲೆಯನ್ನು ಪಡೆಯಬಹುದು.

ಪ್ಯಾನ್ ಕಾರ್ಡ್ ಹೊಂದಿರುವ ಯಾವುದೇ ರೈತನಿಂದ ಯಾವುದೇ ಪ್ರಕಾರದ ವಸ್ತು ಅಥವಾ ಧಾನ್ಯಗಳು ಕೊಂಡುಕೊಂಡು ಕಂಪೆನಿಗಳು, ಪ್ರೊಸೆಸರ್ಗಳು ಮತ್ತು ಎಫ್‌ಪಿಒಗಳು ಅಧಿಸೂಚಿತ ಮಂಡಿಗಳ ಆವರಣದ ಹೊರಗೆ ಮಾರಾಟ ಮಾಡಬಹುದು ಎಂದು ಅವರು ಹೇಳಿದರು. ಖರೀದಿದಾರರು ತಕ್ಷಣ ಅಥವಾ ಮೂರು ದಿನಗಳಲ್ಲಿ ರೈತರಿಗೆ ಪಾವತಿಸಬೇಕು ಮತ್ತು ಸರಕುಗಳನ್ನು ವಿತರಿಸಿದ ನಂತರ ರಶೀದಿಯನ್ನು ನೀಡಬೇಕು. ಮಂಡಿಗಳ ಹೊರಗೆ ವ್ಯಾಪಾರ ಮಾಡಲು ‘ಇನ್ಸ್‌ಪೆಕ್ಟರ್ ರಾಜ್’ ಇರುವುದಿಲ್ಲ ಎಂದು ಹೇಳಿದರು. ಯಾವುದೇ ಅಡೆತಡೆಯಿಲ್ಲದೆ ಮಂಡಿಗಳ ಹೊರಗೆ ವ್ಯಾಪಾರ ಮಾಡಲು ಯಾವುದೇ ಕಾನೂನು ತೊಡಕು ಇರುವುದಿಲ್ಲ ಎಂದು ಸಚಿವರು ಹೇಳಿದರು.

ಪ್ರಸ್ತುತ, ದೇಶಾದ್ಯಂತ ಹರಡಿರುವ 6,900 ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು) ಮಂಡಿಗಳಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಕೃಷಿ ಉತ್ಪನ್ನಗಳನ್ನು ಮಂಡಿಗಳ ಹೊರಗೆ ಮಾರಾಟ ಮಾಡಲು ರೈತರಿಗೆ ನಿರ್ಬಂಧಗಳಿವೆ.