ಪೊಲೀಸ್ ಅಧಿಕಾರಿಯಾಗಿ ತಾನು ಕಲಿತ ಶಾಲೆಗೆ ಭೇಟಿ ನೀಡಿದಾಗ ಮೊದಲು ಮಾಡಿದ್ದೇನು, ಇದಲ್ಲವೇ ಸಂಸ್ಕಾರ!!!

ಗುರುವಿನ ಸ್ಥಾನವೇ ಪರಮಶ್ರೇಷ್ಠ ಎಂದು ಯಾರೋ ಒಬ್ಬರು ನಿಜವಾಗಿ ಹೇಳಿದ್ದಾರೆ. ಆದ್ದರಿಂದ ಜೀವನದಲ್ಲಿ ಗುರುವನ್ನು ಮರೆಯಬಾರದು. ಸಾಮಾನ್ಯವಾಗಿ ನಾವು ಎಲ್ಲರನ್ನೂ ಬಿಟ್ಟು ಮುಂದೆ ಸಾಗುತ್ತೇವೆ, ಯಾರ ಸಹಾಯದಿಂದ ನಾವು ಯಶಸ್ಸಿನ ಸಾಗರವನ್ನು ದಾಟಿದ್ದೇವೆಯೋ ಅವರನ್ನು ಮರೆತುಬಿಡುತ್ತೇವೆ. ನಾವು ಎಷ್ಟು ಯಶಸ್ವಿಯಾಗುತ್ತೇವೆ ಅಥವಾ ಎಷ್ಟು ವಿಫಲರಾಗುತ್ತೇವೆ ಎಂಬುದು ಮುಖ್ಯವಲ್ಲ. ನಿಮ್ಮ ವ್ಯಕ್ತಿತ್ವವನ್ನು ನೀವು ಎಷ್ಟು ಎತ್ತರಕ್ಕೆ ಏರಿಸುತ್ತೀರಿ ಎಂಬುದು ಜೀವನದಲ್ಲಿ ತುಂಬಾ ಮುಖ್ಯವಾಗಿದೆ.

ಮಕ್ಕಳ ವಿದ್ಯಾಭ್ಯಾಸವು ಮೊದಲು ಮನೆಯಲ್ಲಿ ಮತ್ತು ಮನೆಯಿಂದ ಹೊರಬಂದ ನಂತರ ಶಾಲೆಯಲ್ಲಿ ಪ್ರಾರಂಭವಾಗುತ್ತದೆ. ಶಿಕ್ಷಕರು ಕೂಡ ತರಗತಿಯಲ್ಲಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಸುಧಾರಿಸಲು ಶ್ರಮಿಸುತ್ತಾರೆ. ತರಗತಿಯಲ್ಲಿ ಶಿಕ್ಷಕರು ನಮ್ಮನ್ನು ಒಳ್ಳೆಯ ರೂಢಿ ಕಲಿಸುವದರೊಂದಿಗೆ ನಮ್ಮಲ್ಲಿರುವ ಕೆಟ್ಟ ಅಭ್ಯಾಸಗಳನ್ನು ದೂರು ಮಾಡಲು ಪ್ರಯತ್ನ ಮಾಡುತ್ತಾರೆ.

ಶಿಕ್ಷಕರು ತಾನು ಕಲಿಸುವ ವಿದ್ಯಾರ್ಥಿಯು ಬೆಳೆದು ಉತ್ತಮ ಸ್ಥಾನವನ್ನು ತಲುಪಬೇಕು ಮತ್ತು ಕುಟುಂಬ ಮತ್ತು ಶಾಲೆಗೆ ಕೀರ್ತಿ ತರಬೇಕೆಂದು ಯಾವಾಗಲೂ ಬಯಸುತ್ತಾರೆ. ಶಿಕ್ಷಕರ ಕನಸು ನನಸಾದರೆ ಇಡೀ ಕುಟುಂಬದ ಜೊತೆಗೆ ಶಾಲೆಗೂ ಸಹ ಶಿಕ್ಷಕರ ಬಗ್ಗೆ ಹೆಮ್ಮೆ ಬರುತ್ತದೆ.

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಶಾಲಾ ಶಿಕ್ಷಕಿಯೊಬ್ಬರ ಪಾದ ಮುಟ್ಟುತ್ತಿರುವ ದೃಶ್ಯವಿದೆ. ಗುರುಗಳಿಗೆ ಶಿಷ್ಯ ನೀಡಿದ ಈ ಗೌರವವನ್ನು ಕಂಡು ಎಲ್ಲರೂ ಭಾವುಕರಾಗುತ್ತಾರೆ. ಪೊಲೀಸ್ ಸಮವಸ್ತ್ರ ಧರಿಸಿರುವ ಈ ಪೊಲೀಸ್ ಅಧಿಕಾರಿ ಒಬ್ಬ ಹಳೆಯ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಎಲ್ಲರೂ ಅವರನ್ನು ನೋಡಿ ಬಹಳ ಸಂತೋಷಪಡುತ್ತಾರೆ. ಎಲ್ಲಕ್ಕಿಂತ ಹೆಚ್ಚು ಸಂತೋಷವಾಗಿದ್ದು ಅವರ ಕ್ಲಾಸ್ ಟೀಚರ್ ಗೆ. ಶಿಕ್ಷಕರು ಈ ಅಧಿಕಾರಿಯ ಪರಿಚಯವನ್ನು ಅಲ್ಲಿದ್ದ ವಿದ್ಯಾರ್ಥಿಗಳಿಗೆ ಹೇಳುತ್ತಾರೆ.

ಶಿಕ್ಷಕಿಯು ತನ್ನ ವಿದ್ಯಾರ್ಥಿಯನ್ನು ಬಳಿಯಲ್ಲಿ ಕರೆದು ಅವರಿಗೆ ರೂ.1100 ಬಹುಮಾನವನ್ನು ನೀಡುತ್ತಾರೆ. “ಇವರು ದೇಶದ ಹೆಸರು ಮಾತ್ರವಲ್ಲದೆ ಸಮಾಜ ಮತ್ತು ಪೋಷಕರ ಹೆಸರನ್ನು ಬೆಳಗಿಸಿದ್ದಾರೆ. ನೀವು ಸಹ ಇವರ ಹಾಗೆ ಆಗಬೇಕು ಮತ್ತು ನಿಮಗೂ ಸಹ ಸಮಾಜದಲ್ಲಿ ಉತ್ತಮವಾದ ಗೌರವ ಸಿಗುತ್ತದೆ.”ಎಂದು ಶಿಕ್ಷಕಿಯು ತನ್ನ ವಿದ್ಯಾರ್ಥಿಗಳಿಗೆ ಹೇಳಿದರು.

ಇದಾದ ನಂತರ ತರಗತಿಯ ಮಕ್ಕಳು ಚಪ್ಪಾಳೆ ತಟ್ಟುತ್ತಾರೆ. ಈ ವಿಡಿಯೋ ನೋಡಿದ ಜನರು ಅಧಿಕಾರಿಯನ್ನು ಕೊಂಡಾಡುತ್ತಿದ್ದಾರೆ. ಗುರುವಿನ ಸ್ಥಾನ ಸರ್ವಶ್ರೇಷ್ಠ. ಈ ವೀಡಿಯೋ ನೋಡಿದ ನಂತರ ಎಲ್ಲರೂ ಸಮಯ ತೆಗೆದುಕೊಂಡು ತಮ್ಮ ಬಾಲ್ಯವನ್ನು ಮೆಲುಕು ಹಾಕಬೇಕು ಎಂದು ಹೇಳುತ್ತಿದ್ದಾರೆ.