ಆಲ್ಕೋಹಾಲ್ ಆರೋಗ್ಯಕ್ಕಾಗಿ ಅಪಾಯಕಾರಿ ಇದ್ದರೂ ಸೈನಿಕರಿಗೇಕೆ ಕೊಡುತ್ತಾರೆ? ಅದೂ ಕಡಿಮೆ ಬೆಲೆಯಲ್ಲಿ..? ಇಲ್ಲಿದೆ ನೋಡಿ ಅದರ ಹಿಂದಿನ ಅಚ್ಚರಿ ಮೂಡಿಸುವ ಕಾರಣಗಳು!
ಅತಿಯಾದರೆ ಅಮೃತವೂ ವಿಷ ಎನ್ನುವ ಗಾದೆ ಮಾತಿನಂತೆ, ಯಾವುದು ಸಹ ಅತಿರೇಕಕ್ಕೆ ಹೋಗಬಾರದು. ಇನ್ನು ಎಣ್ಣೆ ವಿಷಯಕ್ಕೆ ಬಂದರಂತೂ ಇದು ದೇಹಕ್ಕೆ ತುಂಬಾ ಅಪಾಯಕಾರಿ ಎಂದೇ ಹೇಳಲಾಗುತ್ತದೆ. ಮಧ್ಯದ ಅತಿಯಾದ ಸೇವನೆಯು ಯಕೃತ್ತಿಗೆ ಹಾಳುಮಾಡುತ್ತದೆ.
ಇಲ್ಲಿ ಮಹತ್ವದ ವಿಷಯವೇನೆಂದರೆ, ಗಡಿಯ ಮೇಲೆ ನಿಂತು ದೇಶದ ರಕ್ಷಣೆಯನ್ನು ಮಾಡುವ ನಮ್ಮ ನಿಮ್ಮ ಅಭಿಮಾನದ ಸೈನಿಕರಿಗೆ ಅಲ್ಕೋಹಲ್ ನ್ನು ಯಾಕೆ ಕೊಡಲಾಗುತ್ತದೆ? ಅದು ಕಡಿಮೆ ಬೆಲೆಯಲ್ಲಿ. ಆಲ್ಕೋಹಲ್ ನ್ನು ಹಾನಿಕಾರಕವೆಂದು ಹೇಳುತ್ತಾರೆ. ಆದರೆ ಸೈನಿಕರ ಸಲುವಾಗಿ ಯಾಕೆ ಈ ರೀತಿಯ ವ್ಯವಸ್ಥೆ, ಬದಲಾಗಿ ಸೈನಿಕರನ್ನು ಮಧ್ಯದಿಂದ ಆದಷ್ಟು ದೂರವಿಡಬೇಕು ಅಲ್ವಾ? ಇದನ್ನೇ ಇಲ್ಲಿ ನೋಡುವ.
ಸೈನಿಕರ ಜೀವನ ಶಿಸ್ತಿನ ಜೀವನವಾಗಿದೆ. ಅವರು ಯಾವತ್ತೂ ಜಾಗೃತರಾಗಿರುತ್ತಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಎಂಥ ಕಠಿಣ ಸಂದರ್ಭಗಳಿಗೂ ಹೊಂದಿಕೊಳ್ಳುವಂತಹ ಮನೋಭಾವ ಉಳ್ಳವರಾಗಿರುತ್ತಾರೆ. ಸೈನಿಕರು ತಮ್ಮ ಜೀವನದಲ್ಲಿ ಅನೇಕ ರೀತಿಯ ಶಿಸ್ತಿಗೆ ಮತ್ತು ಕಟ್ಟುಪಾಡುಗಳಿಗೆ ಹೊಂದಿಕೊಂಡು ಬಂದವರಾಗಿರುತ್ತಾರೆ. ಈ ರೀತಿಯಾಗಿ ಸೈನಿಕರ ಜೀವನ ಶಿಸ್ತಿನಿಂದ ಕೂಡಿದ್ದರೂ ಸರ್ವಸಾಮಾನ್ಯ ಮನುಷ್ಯನಲ್ಲಿ ಒಂದು ಪ್ರಶ್ನೆ ಸಹಜವಾಗಿ ಏಳುತ್ತದೆ. ಆರ್ಮಿಯವರಿಗೆ ಮಧ್ಯವನ್ನು ಏಕೆ ಕೊಡಲಾಗುತ್ತದೆ? ಅಥವಾ ಇವರಿಗೆ ಮಧ್ಯದ ನಿರ್ಬಂಧವನ್ನು ಏಕೆ ಹಾಕುವುದಿಲ್ಲ. ಎಂಬ ಪ್ರಶ್ನೆಗಳು ಇಲ್ಲಿವೆ ಕೆಲವು ಸರಿಯಾದ ಉತ್ತರಗಳು ನೀವೇ ನೋಡಿ.
ಮೊದಲ ಕಾರಣವೇನೆಂದರೆ, ಬ್ರಿಟಿಷ್ ಸೈನ್ಯದಲ್ಲಿ ಮಧ್ಯಪಾನ ಮಾಡುವ ಪರಂಪರೆ ಇತ್ತು. ಅದೇ ಪರಂಪರೆಯನ್ನು ಈಗಲೂ ಮುಂದುವರಿಸಿಕೊಂಡು ಬರಲಾಗಿದೆ. ಪ್ರತಿಯೊಬ್ಬ ಸೈನಿಕನ ಮತ್ತು ಅಧಿಕಾರಿಯ ಮಧ್ಯದ ಪ್ರಮಾಣವನ್ನು ಮೊದಲೇ ಪ್ರಮಾಣಿಕರಿಸಲಾಗಿರುತ್ತದೆ. ಸ್ವಾತಂತ್ರ್ಯದ ನಂತರವೂ ಈ ಪರಂಪರೆಯನ್ನು ಹಾಗೆಯೇ ಮುಂದುವರಿಸಿಕೊಂಡು ಬರಲಾಯಿತು. ಸೈನ್ಯದಲ್ಲಿ ಯಾವಾಗ ಹೊಸದಾಗಿ ನೇಮಕ ಮಾಡಲಾಗುತ್ತದೆಯೋ ಆಗ ಆ ವ್ಯಕ್ತಿಯ ಸ್ವಾಗತಕ್ಕೆ ಮಧ್ಯವನ್ನೆ ಕೊಡಲಾಗುತ್ತದೆ.

ಜವಾನರು ತಮ್ಮ ಕುಟುಂಬ, ಸಂಬಂಧಿಕರನ್ನು ಮತ್ತು ಮಿತ್ರರನ್ನು ಬಿಟ್ಟು ಸಾವಿರಾರು ಕಿಲೋಮೀಟರ್ ಗಳ ದೂರದಲ್ಲಿ ಏಕಾಂಗಿಯಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿರುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಯಾವುದೇ ರೀತಿಯಲ್ಲಿ ಏಕಾಂಗಿತನ ಕಾಡಬಾರದು, ಮತ್ತು ಮನೆಯವರನ್ನು ಸಂಬಂಧಿಕರನ್ನು ಹಾಗೂ ಮಿತ್ರರನ್ನು ನೆನಪಿಸಿಕೊಂಡು ಭಾವುಕರಾಗಿ ಜೀವನ ತೆಗೆಯುವುದು ತುಂಬಾ ಕಷ್ಟವಾಗುತ್ತದೆ. ಹಾಗೂ ಕೆಲಸದಲ್ಲಿ ಸಹಿತ ಅನೇಕ ಲೋಪಗಳಾಗುವ ಸಂಭವವಿರುತ್ತದೆ. ಇದನ್ನೆಲ್ಲ ಯಾವುದೋ ಒಂದು ರೀತಿಯಲ್ಲಿ ಮರೆಸುವ ಸಲುವಾಗಿ ಮತ್ತು ತಮ್ಮ ಜವಾಬ್ದಾರಿಯನ್ನು ಯೋಗ್ಯರೀತಿಯಲ್ಲಿ ನಿರ್ವಹಿಸುವ ಸಲುವಾಗಿ ಈ ರೀತಿಯ ವ್ಯವಸ್ಥೆಯನ್ನು ಸೈನಿಕರಿಗೆ ಮಾಡಲಾಗಿದೆ.
ಮೂರನೆಯ ಹಾಗೂ ಎಲ್ಲಕ್ಕೂ ಮುಖ್ಯವಾದ ಕಾರಣವೇನೆಂದರೆ, ಸೈನ್ಯದಲ್ಲಿ ಕೆಲಸ ಮಾಡುವ ಸೈನಿಕರ ಕೆಲಸವು ತುಂಬಾ ಪ್ರತಿಕೂಲವಾದ ಪರಿಸ್ಥಿತಿಯಿಂದ ಕೂಡಿರುತ್ತದೆ. ವಾತಾವರಣವು ಎಲ್ಲ ಕಡೆಗೂ ಒಂದೇ ರೀತಿಯಾಗಿರುವುದಿಲ್ಲ. ಭಾರತದ ಕೆಲವೊಂದು ಕಡೆಗಳಲ್ಲಿ ತುಂಬಾ ಶೀತವಿರುತ್ತದೆ. ಅಂತಹ ರಕ್ತ ಹೆಪ್ಪುಗಟ್ಟುವ ಸ್ಥಳಗಳಲ್ಲಿ ಸೇವೆ ಮಾಡುವ ಜವಾಬ್ದಾರಿಯನ್ನು ಸುಗಮವಾಗಿ ನಿರ್ವಹಿಸಬೇಕಾಗುತ್ತದೆ. ಇಂಥ ಸ್ಥಳಗಳಲ್ಲಿ ಮಧ್ಯವು ಸೈನಿಕರಿಗೆ ಬೆಚ್ಚಗಿಡುವ ಕಾರ್ಯವನ್ನು ಮಾಡುತ್ತದೆ. ಜೊತೆಗೆ ಪ್ರತಿಕೂಲ ಪರಿಸ್ಥಿತಿಯಲ್ಲಿ ಸೇವೆ ಮಾಡುವ ಛಲ ನಿರ್ಮಾಣವಾಗುತ್ತದೆ.
ಆದರೆ ಕರ್ತವ್ಯ ನಿರತರಾದ ಸೈನಿಕರು ಮಧ್ಯಪಾನ ಮಾಡುವುದಿಲ್ಲ. ಕೆಲವೊಮ್ಮೆ ಅಧಿಕಾರಿಗಳಿಗೆ ಮರ್ಯಾದಿತ ಸ್ವರೂಪದಲ್ಲಿ ಮದ್ಯಪಾನಕ್ಕೆ ಸಮ್ಮತಿ ನೀಡಿರುತ್ತಾರೆ. ನಿಶ್ಚಿತವಾಗಿಯೂ ಇದರ ಬಗ್ಗೆ ತುಂಬಾ ಕಾಳಜಿ ವಹಿಸಿರುತ್ತಾರೆ. ಯಾವುದೇ ಅಧಿಕಾರಿಗಳು ಈ ನಿಯಮವನ್ನು ಉಲ್ಲಂಘಿಸಿದ್ದೇ ಆದಲ್ಲಿ ಅವರ ಮೇಲೆ ಕಠಿಣವಾದ ಮತ್ತು ಶಿಸ್ತುಕ್ರಮಗಳನ್ನು ಜರುಗಿಸುತ್ತಾರೆ. ಕೆಲವೊಂದು ಪ್ರಸಂಗಗಳಲ್ಲಿ ಕೋರ್ಟ್ ಮಾರ್ಷಲ್ ನಲ್ಲಿ ಹಾಜರಾತಿಯೂ ಕೊಡಬೇಕಾಗುತ್ತದೆ.