ಇಂಡಿಯನ್ ಐಡಲ್ 12 : ಯಾರು ಹೇಗಾದರೂ ಹಾಡಲಿ ನೀವು ಹೊಗಳಿ ಅಂದಿದ್ದರು! : ಕಿಶೋರ್ ಕುಮಾರ್ ಪುತ್ರ ಅಮಿತ್ ಕುಮಾರ್ ಆರೋಪ

ಇಂಡಿಯನ್ ಐಡಲ್ ಈ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದೆ. ಕೆಲವೊಮ್ಮೆ ಏರುತ್ತಿರುವ ಟಿಆರ್‌ಪಿ ಮತ್ತು ಕೆಲವೊಮ್ಮೆ ವಿವಾದಗಳೊಂದಿಗೆ ಅದು ಸದಾ ಸುದ್ದಿಯಲ್ಲಿದೆ. ಇತ್ತೀಚೆಗೆ, ಕಿಶೋರ್ ಕುಮಾರ್ ಅವರ ಪುತ್ರ ಅಮಿತ್ ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಅತಿಥಿ ನ್ಯಾಯಾಧೀಶರಾಗಿ ಬಂದಿದ್ದರು. ಅವರು ಹೊರಗೆ ಬಂದು ಕಾರ್ಯಕ್ರಮದ ಬಗ್ಗೆ ಅನೇಕ ವಿಷಯಗಳನ್ನು ಮಾತನಾಡಿದರು. ಅದೀಗ ವಿವಾದಕ್ಕೀಡುಮಾಡಿದೆ.

ಅಮಿತ್ ಕುಮಾರ್ ಆರೋಪ :
‘ಇಂಡಿಯನ್ ಐಡಲ್ 12’ ಕೆಲವು ಸಮಯಗಳಿಂದ ಸಾಕಷ್ಟು ವಿವಾದಗಳಲ್ಲಿ ಸಿಲುಕಿಕೊಂಡಿದೆ. ಇತ್ತೀಚೆಗೆ ಈ ಶೋನಲ್ಲಿ, ಕಿಶೋರ್ ಕುಮಾರ್ ವಿಶೇಷ ಸಂಚಿಕೆಯಲ್ಲಿ, ಅವರ ಮಗ ಅಮಿತ್ ಕುಮಾರ್ ಅತಿಥಿ ನ್ಯಾಯಾಧೀಶರಾಗಿ ಆಗಮಿಸಿದ್ದರು. ಕಾರ್ಯಕ್ರಮದ ನಂತರ ಅವರು ಯಾವುದೇ ಸ್ಪರ್ಧಿಗಳ ಹಾಡುಗಾರಿಕೆಯನ್ನು ಇಷ್ಟಪಡುವುದಿಲ್ಲ ಎಂದು ಹೇಳಿದರು, ಆದರೆ ಮೇಕರ್ಸ್ ಸೂಚನೆಯ ಮೇರೆಗೆ ಎಲ್ಲರನ್ನೂ ಹೊಗಳಬೇಕಾಯಿತು ಎಂದಿದ್ದಾರೆ!

ಅಮಿತ್ ಕುಮಾರ್ ಹಣಕ್ಕಾಗಿ ಬಂದಿದ್ದರು :
ಹಣಕ್ಕಾಗಿ ಮಾತ್ರ ಕಾರ್ಯಕ್ರಮಕ್ಕೆ ಹೋಗಿದ್ದೆ ಎಂದು ಅಮಿತ್ ಕುಮಾರ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರು ‘ಇಂದು ಯಾರಿಗೆ ಹಣದ ಅಗತ್ಯವಿಲ್ಲ? ನನಗೆ ಆ ಕಾರ್ಯಕ್ರಮದ ತಯಾರಕರು ಕೇಳಿದಷ್ಟು ಹಣವನ್ನು ನೀಡಿದ್ದಾರೆ, ಹಾಗಾಗಿ ನಾನು ಪ್ರದರ್ಶನಕ್ಕೆ ಹೋದೆ ಎಂದಿದ್ದಾರೆ.

ಯಾರು ಏನೇ ಹಾಡಲಿ – ಹೇಗೇ ಹಾಡಲಿ ನೀವು ಎಲ್ಲರನ್ನೂ ಹೊಗಳಬೇಕು ಎಂದು ನನಗೆ ತಿಳಿಸಲಾಯಿತು, ಏಕೆಂದರೆ ಇದನ್ನು ಕಿಶೋರ್ ಕುಮಾರ್ ಅವರಿಗೆ ಗೌರವಿಸಲಾಗುತ್ತಿದೆ ಎಂದು ಅಮಿತ್ ಅವರಿಗೆ ಕಾರ್ಯಕ್ರಮದ ಆಯೋಜಕರು ಹೇಳಿದ್ದರಂತೆ!

ಆದರೆ ಮೊನ್ನೆ ಶನಿವಾರ ಹಾಗೂ ರವಿವಾರ ಅನುರಾಧಾ ಪೌಡ್ವಾಲ್ ಮತ್ತು ಕುಮಾರ್ ಸಾನು ಅತಿಥಿಯಾಗಿ ಇಂಡಿಯನ್ ಐಡಲ್ ಗೆ ಬಂದಿದ್ದರು. ಅವರು ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ಅಮಿತ್ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ನನಗೆ ಅದರಲ್ಲಿ ವಿವಾದ ಕಾಣಿಸಲಿಲ್ಲ ಎಂದು ಅನುರಾಧ ಸ್ಪಷ್ಟಪಡಿಸಿದ್ದಾರೆ.

ಈ ಸ್ಪರ್ಧಿಗಳ ಪ್ರತಿಭೆಯನ್ನು ಕೆಲವರು ಪ್ರಶ್ನಿಸುತ್ತಿದ್ದರೆ ನನಗೆ ಆಶ್ಚರ್ಯವಾಗುತ್ತದೆ ಎಂದು ಕೂಡ ಅವರು ಹೇಳಿದರು. ಅಮಿತ್ ಜಿ ವಿವಾದದ ಬಗ್ಗೆ ನನಗೆ ತಿಳಿದಿಲ್ಲ, ಆದರೆ ನಾನು ಪ್ರದರ್ಶನಕ್ಕೆ ಹೋದಾಗ ಮಕ್ಕಳು ನಿಜವಾಗಿಯೂ ಚೆನ್ನಾಗಿ ಹಾಡಿದರು. ಅವರ ಪ್ರದರ್ಶನ ನೋಡಿ ನನಗೆ ಆಶ್ಚರ್ಯವಾಯಿತು ಎಂದು ಅನುರಾಧಾ ಪೌಡ್ವಾಲ್ ಅವರು ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾಗಿ ಆಗಮಿಸಿದ ನಂತರ ಹೇಳಿದ್ದಾರೆ.

ಇಬ್ಬರಲ್ಲಿ ಯಾರದು ನಿಜವೋ ಗೊತ್ತಿಲ್ಲ. ಈ ಮೊದಲು ಕೂಡ ಇಂಡಿಯನ್ ಐಡಲ್ ಬಗ್ಗೆ ಆರೋಪ ಕೇಳಿ ಬಂದಿತ್ತು. ಬಹುಶ ಸೋನು ನಿಗಮ್ ಈ ಕಾರ್ಯಕ್ರಮವನ್ನು ಸ್ಕ್ರಿಪ್ಟೆಡ್ ಎಂದು ಕರೆದಿದ್ದರು. ಫೇಸ್ಬುಕ್ ಲೈವ್ ನಲ್ಲೇ ಅವರು ಈ ಆರೋಪ ಮಾಡಿದ್ದರು. ಆಗ ಕೂಡ ಸಾಕಷ್ಟು ವಿವಾದವುಂಟಾಗಿ ಪರ ವಿರೋಧ ಚರ್ಚೆ ನಡೆದಿದ್ದವು.

ಸೋನು ನಿಗಮ್ ಆರೋಪದ ನಂತರ ಹಾಗೂ ಅಮಿತ್ ಜೀ ಹೇಳಿಕೆ ನಂತರ ಕಾರ್ಯಕ್ರಮದಲ್ಲಿ ಅತಿಥಿಗಳನ್ನು “ನಿಮಗೇನನಿಸುತ್ತೆ?” ಎಂದು ಕೇಳುವ ಮೂಲಕ ಕಾರ್ಯಕ್ರಮದ ನಿರೂಪಕ ಆದಿತ್ಯ ನಾರಾಯಣ್ ಜನರಲ್ಲಿ ನಂಬಿಕೆ ಹುಟ್ಟಿಸುವ ಪ್ರಯತ್ನ ಮಾಡಿದ್ದರು.

ಮೊದಲಿನಿಂದಲೂ ರಿಯಾಲಿಟಿ ಶೋ ಗಳ ಬಗೆಗೆ ಜನರಲ್ಲಿ ಸಂಶಯ ಇರುವುದು ಸುಳ್ಳಲ್ಲ. ಕನ್ನಡದ ಬಿಗ್ ಬಾಸ್ ಅನ್ನು ಕೂಡ ಕೆಲವರು ಸ್ಕ್ರಿಪ್ಟೆಡ್ ಅಂದವರಿದ್ದಾರೆ. ಆಗೆಲ್ಲ ಕಿಚ್ಚ ಸುದೀಪ್ ನೊಂದುಕೊಂಡಿದ್ದೂ ಇದೆ. ಆದರೂ ಜನರಲ್ಲಿ ರಿಯಾಲಿಟಿ ಶೋ ಗಳ ಬಗೆಗೆ ವಿಶ್ವಾಸ ಮೂಡಿಲ್ಲ.
-Team Infotrend